ನೀಛಾಗ್ರೇಸರ

ಮುದ್ದಾದ
ಕುರಿಮರಿಯ ತರುವೆ
ಬೆಳೆಸುವೆ ಕಕ್ಕುಲತೆಯಲಿ

ಕೇಳೀತೆ ಹಸಿವೆಂದು
ಬೆಬ್ಬಳಿಸಿಯಾತೆ ಬಾಯಾರಿಕೆಯೆಂದು
ಮೊರೆದೀತೆ ದೇಹಾಲಸ್ಯವೆಂದು
ನಮ್ಮಂತೆಯೇ ಅಲ್ಲವೆ ಅದರದೂ ಜೀವವೆಂದು.

ಸಗಣಿ ಬಾಚುವೆ
ಮೈಯ ತೊಳೆಯುವೆ
ಕೈಯಾರೆ ತಿನ್ನಿಸಿ, ಕುಣಿಸಿ, ಆಡಿಸಿ
ಒಂದು ಹೆಸರೂ ಕರೆಯುವೆ
ಅಕ್ಕರೆ ತೋರುವೆ ಹಲವು ಹತ್ತು ರೀತಿಯಲಿ.

ಕಣ್ಣಿಟ್ಟು ಕಾಯುವೆ
ಎತ್ತೆಂದರತ್ತ ಬಿಡದೆ
ನಾಯಿ, ತೋಳಗಳ ಬಾಯಿಗೆ ಕೊಡದೆ
ಘಾಸಿಗೆಡೆ ಕೊಡದೆ
ಸ್ನೇಹ ಪಾರಮ್ಯದಲಿ;
ಚರ್ಬಿ ಬಲಿಯುವತನಕ

ಉಬ್ಬುಬ್ಬಿ ಬೆಳೆದಂತೆ ಅದು
ಹಿಗ್ಗುವೆ ಒಡಲಲ್ಲಿ
ಬರಲಿರುವ ಹಬ್ಬದ ದಿನವ ನೆನೆದು.

ಯಾಕಯ್ಯಾ… !
ಬದಲಾಗುವೆ ನಂಬಿಕೆಯಲಿ ?
ನಿನ್ನ ತೆರನದೆ ರಕ್ತ ಮಾಂಸದ
ನಿನ್ನಂತಹುದೇ ಆದ
ನಿನ್ನಲ್ಲೇ ಜೀವವಿರಿಸಿದೊಂದು ಜೀವವ

ಎಳೆದೊಯ್ದು
ಹೊಯ್ಗುಡುಲಿಗಿಡಿದಾಗ
ತಲೆ ಕತ್ತರಿಸಿ ಕೆಡೆದಾಗ
ಸಾವ ನೋವಿನಲದು ಬಾಯಿ ಬಾಯಿ ಬಿಡುವಾಗ
ರಕ್ತ ಮಡುವಾಗಿ ಹರಿವಾಗ
ಮುಂಡ ಪಟ ಪಟ ಒದರಾಡುವಾಗ.
ನಿನಗೆ ಏನೂ ಅನ್ನಿಸದು ?
ಬದಲಿಗೆ ನಿನ್ನ ಕಣ್ಣಲ್ಲಿ ಮಿಂಚು ಸೆಲೆಯೊಡೆಯುವುದು.

ಸಾಲದೆಂಬಂತೆ
ತಲೆಯ ಹೆಕ್ಕಿ
ದೇವರೆಂಬುದರ ಮುಂದಿಕ್ಕಿ
ನೀರ ಹನಿಸಿ
ಹರಕೆ ಕೇಳುವೆ
ಬಾಯಿಬಿಟ್ಟ ಸಂಖ್ಯೆಯಾಧರಿಸಿ
ಒಳಿತಾಗುವುದೆಂದು ಭಾವಿಸುವೆ.

ಏಕೆ ?
ಜಿಹ್ವಾ ಕ್ಷುದ್ರತೆಗೆ ವಶವಾಗಿ
ಕುರಿತು ಚಿಂತಿಸದೆ ನೈಜ ಪಾಶಗಳ ಬಗೆಗೆ
ಎಳೆವೆ ಬರೆ
ಹಸಿ ಶಿಶು ಹೃದಯದ ಮೇಲೆ.

ಬಿಡು !
ನೀಡುವುದೊಂದು, ಬೇಡುವುದಿನ್ನೊಂದರ
ನೀಛಾಗ್ರೇಸರರ ಸಂಗಕ್ಕಿಂತ ನಿಸೂರಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ಯಾಸಿ ರತ್ನ
Next post ಈ ಜಗದೊಳೆಲ್ಲರೊಪ್ಪುವ ಮಾತನಾಡಿದವರುಂಟೇ ?

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys